Telegram Join My Telegram WhatsApp Join My WhatsApp

ಭಾರತದ ಗಡಿಗೆ ಪದೇ ಪದೇ ಡ್ರೋನ್‌ ಏಕೆ ನುಗ್ಗಿಸುತ್ತಿದೆ ಪಾಕಿಸ್ತಾನ? ಮತ್ತೊಮ್ಮೆ ಪೆಟ್ಟು ತಿಂದರೆ ಸಂಪೂರ್ಣ ಅವಸಾನ!

“ಜಾಣನಿಗೆ ಮಾತಿನ ಪೆಟ್ಟು, ದಡ್ಡನಿಗೆ ದೊಣ್ಣೆ ಏಟು ಎಂಬಂತೆ, ಭಾರತದಿಂದ ಪದೇ ಪದೇ ಕಪಾಳಮೋಕ್ಷ ಮಾಡಿಸಿಕೊಳ್ಳುವ ಪಾಕಿಸ್ತಾನ ಇಷ್ಟಾದರೂ ಬುದ್ಧಿ ಕಲಿಯುತ್ತಿಲ್ಲ. ಭಾರತವನ್ನು ಸದಾ ಕೆಣಕುವುದರಲ್ಲೇ ಕಾಲ ಕಳೆಯುವ ಅದು ಇದೀಗ ಭಾರತದ ಗಡಿಯೊಳಗೆ ತನ್ನ ಡ್ರೋನ್‌ಗಳನ್ನು ನುಗ್ಗಿಸುತ್ತಿದೆ. ಈ ಡ್ರೋನ್‌ಗಳು ಶಸ್ತ್ರಾಸ್ತ್ರಗಳನ್ನು ಮತ್ತು ಮಾದಕವಸ್ತುಗಳನ್ನು ಹೊತ್ತು ಭಾರತದ ಭೂಪ್ರದೇಶದಲ್ಲಿ ಬೀಳುತ್ತಿವೆ. ಪಾಕಿಸ್ತಾನವೇಕೆ ಪದೇ ಪದೇ ಭಾರತದ ಎಲ್‌ಒಸಿ ಬಳಿ ಡ್ರೋನ್‌ಗಳನ್ನು ಕಳುಹಿಸುತ್ತಿದೆ? ಈ ಡ್ರೋನ್‌ ಯುದ್ಧವನ್ನು ಭಾರತ ಹೇಗೆ ನಿಭಾಯಿಸುತ್ತಿದೆ? ಇಲ್ಲಿದೆ ಮಾಹಿತಿ”.

ಹೈಲೈಟ್ಸ್‌:

  • ವಾಸ್ತವ ಗಡಿ ನಿಯಂತ್ರಣ ರೇಖೆ ಬಳಿ ಪದೇ ಪದೇ ಕಾಣಿಸಿಕೊಳ್ಳುವ ಪಾಕಿಸ್ತಾನಿ ಡ್ರೋನ್‌ಗಳು.
  • ಭಾರತೀಯ ಸೇನೆಯಿಂದ ಪೆಟ್ಟು ತಿಂದರೂ ಬುದ್ಧಿ ಕಲಿಯದ ಪಾಕಿಸ್ತಾನ ಸೇನೆ.
  • ಪಾಕಿಸ್ತಾನದ ಡ್ರೋನ್‌ ಯುದ್ಧವನ್ನು ಹೇಗೆ ನಿಭಾಯಿಸುತ್ತದೆ ಭಾರತ? ಎಲ್‌ಒಸಿ ಬಳಿ ಕಟ್ಟೆಚ್ಚರ.

ಹೊಸದಿಲ್ಲಿ: ದಪ್ಪ ಚರ್ಮದ ಪಾಕಿಸ್ತಾನಕ್ಕೆ ಎಷ್ಟು ಬಡಿದರೂ ನಾಚಿಕೆಯೇ ಇಲ್ಲ. ಈಗಷ್ಟೇ ಆಪರೇಷನ್‌ ಸಿಂಧೂರ ಸೇನಾ ಕಾರ್ಯಾಚರಣೆಯಲ್ಲಿ ಭಾರತದಿಂದ ಪೆಟ್ಟು ತಿಂದು ಇಂಗು ತಿಂದ ಮಂಗನಂತಾಗಿರುವ ಪಾಕಿಸಸ್ತಾನ, ಏನೂ ಆಗಿಯೇ ಇಲ್ಲ ಎಂಬಂತೆ ಎಲ್‌ಒಸಿ ಬಳಿ ಮತ್ತೆ ಭಾರತೀಯ ಸೇನೆಯನ್ನು ಕೆಣಕುವ ದುಸ್ಸಾಹಸಕ್ಕೆ ಕೈಹಾಕಿದೆ.

ನೇರ ಯುದ್ಧದಲ್ಲಿ ಭಾರತವನ್ನಜು ಸೋಲಿಸಲು ಸಾಧ್ಯವಿಲ್ಲ ಎಂದು ಅರಿತು, ಎಲ್‌ಒಸಿ ಬಳಿ ಪಾಕಿಸ್ತಾನ ಡ್ರೋನ್‌ ರವಾನೆಯ ಹೊಸ ಆಟವನ್ನು ಶುರುಮಾಡಿದೆ. ಕಳೆದ ಜ.11ರಂದು ಭಾರತ-ಪಾಕಿಸ್ತಾನ ಗಡಿ ಬಳಿ ಸಾಕಷ್ಟು ಸಂಖ್ಯೆಯಲ್ಲಿ ಡ್ರೋನ್‌ಗಳು ಕಾಣಿಸಿಕೊಂಡಿದ್ದು, ಭಾರತೀಯ ಸೇನೆ ಗಡಿ ದಾಟಿ ಬರುತ್ತಿದ್ದ ಎಲ್ಲಾ ಡ್ರೋನ್‌ಗಳನ್ನು ಹೊಡೆದುರುಳಿಸಿದೆ.

ಆದಾಗ್ಯೂ, ಪಾಕಿಸ್ತಾನವು ಪದೇ ಪದೇ ಎಲ್‌ಒಸಿ ಬಳಿ ಡ್ರೋನ್‌ ಕಳುಹಿಸುತ್ತಿದ್ದು, ಗಡಿಯಲ್ಲಿ ಭಾರತೀಯ ಸೇನೆ ಕಟ್ಟೆಚ್ಚರವಹಿಸಿದೆ. ಈ ಕುರಿತು ಪಾಕಿಸ್ತಾನಕ್ಕೆ ಎಚ್ಚರಿಕೆಯನ್ನೂ ನೀಡಿರುವ ಭಾರತೀಯ ಸೇನೆ, ಡ್ರೋನ್‌ ಹಾರಾಟವನ್ನು ನಿಲ್ಲಿಸುವಂತೆ ಖಡಕ್‌ ಧ್ವನಿಯಲ್ಲಿ ಹೇಳಿದೆ. ಆದರೆ ಪೆಟ್ಟು ತಿಂದರೆನೇ ಸಮಾಧಾನಪಡುವ ಪಾಕಿಸ್ತಾನ, ಭಾರತೀಯ ಸೇನೆಯಿಂದ ಮತ್ತೊಂದು ಸುತ್ತಿನ ಕಪಾಳಮೋಕ್ಷಕ್ಕೆ ಸಜ್ಜಾದಂತೆ ಕಾಣುತ್ತಿದೆ.

video📽️ link🔗    Click Here

ಈ ಕುರಿತು ಕಳೆದ ಜ.13(ಮಂಗಳವಾರ) ಪ್ರತಿಕ್ರಿಯೆ ನೀಡಿದ್ದ ಭಾರತೀಯ ಭೂಸೇನೆ ಮುಖ್ಯಸ್ಥ ಜನರಲ್‌ ಉಪೇಂದ್ರ ದ್ವಿವೇದಿ, “ಗಡಿಯಲ್ಲಿ ನಾವು ನೋಡಿದ ಡ್ರೋನ್‌ಗಳು ಬಹಳ ಚಿಕ್ಕ ಗಾತ್ರದ್ದಾಗಿದ್ದು, ಅವು ತಮ್ಮ ದೀಪಗಳನ್ನು ಆನ್‌ ಮಾಡಿಕೊಂಡು ಬರುತ್ತವೆ. ಅವು ತುಂಬಾ ಎತ್ತರದಲ್ಲಿ ಹಾರುವುದಿಲ್ಲವಾದ್ದರಿಂದ ಅವುಗಳನ್ನು ಪತ್ತೆಮಾಡುವುದು ನಮಗೆ ಸುಲಭವಾಗಿದೆ. ಪಾಕಿಸ್ತಾನದ ಉದ್ದೇಶ ಭಾರತದ ಗಡಿಯಲ್ಲಿ ನಡೆಯುತ್ತಿರುವ ಸೇನಾ ಚಟುವಟಿಕೆಗಳನ್ನು ತಿಳಿದುಕೊಳ್ಳುವುದಾಗಿದೆ. ಆದರೆ ಈ ಕಾರ್ಯದಲ್ಲಿ ಅದು ಎಂದಿಗೂ ಯಶಸ್ವಿಯಾಗದು ಎಂದು ಸ್ಪಷ್ಟಪಡಿಸಿದ್ದಾರೆ.

ಮುಂದುವರೆದು, “ಜನವರಿ 10ರಂದು ಸುಮಾರು 6 ಡ್ರೋನ್‌ಗಳು ಕಾಣಿಸಿಕೊಂಡಿದ್ದು, ಜನವರಿ 11 ಮತ್ತು 12 ರಂದು 2 ರಿಂದ 3 ಡ್ರೋನ್‌ಗಳು ಕಾಣಿಸಿಕೊಂಡಿವೆ. ಇವು ರಕ್ಷಣಾತ್ಮಕ ಡ್ರೋನ್‌ಗಳಾಗಿದ್ದು, ಗಡಿ ಚಟುವಟಿಕೆಗಳನ್ನು ದಾಖಲಿಸುವ ಉದ್ದೇಶ ಹೊಂದಿದ್ದವು. ಆದರೆ ನಮ್ಮ ಯೋಧರು ಇವುಗಳನ್ನು ಆರಂಭದಲ್ಲೇ ಪತ್ತೆಹಚ್ಚಿ ಹೊಡೆದುರುಳಿಸಿದ್ದಾರೆ” ಎಂದು ಜನರಲ್‌ ಉಪೇಂದ್ರ ದ್ವಿವೇದಿ ಮಾಹಿತಿ ನೀಡಿದ್ದಾರೆ.
ಬಹುತೇಕ ಪಾಕಿಸ್ತಾನದ ಡ್ರೋನ್‌ಗಳಲ್ಲಿ ಮದ್ದುಗುಂಡು ಮತ್ತು ಮಾದಕವಸ್ತು ಪತ್ತೆ ಆಗುತ್ತವೆ. ಇವುಗಳನ್ನು ಗಡಿಯಲ್ಲಿ ಚುರುಕಾಗಿರುವ ಭಯೋತ್ಪಾದಕರಿಗೆ ತಲುಪಿಸಲು ಹಾರಿಬಿಡಲಾಗಿರುತ್ತದೆ. ಆದರೆ 100ರಲ್ಲಿ 99 ಡ್ರೋನ್‌ಗಳನ್ನು ಭಾರತೀಯ ಸೇನೆ ಹೊಡೆದುರುಳಿಸಿರುತ್ತದೆ. ಆದಾಗ್ಯೂ, ಇತ್ತೀಚಿನ ದಿನಗಳಲ್ಲಿ ಡ್ರೋನ್‌ ಚಟುವಟಿಕೆ ಹೆಚ್ಚಾಗಿರುವುದರಿಂದ, ಗಡಿಯಲ್ಲಿ ಕಟ್ಟೆಚ್ಚರವಹಿಸಲಾಗಿದೆ.
ಸ್ಥಳಾನ್ವೇಷಣೆಗಾಗಿ ಬರುವ ಈ ಪಾಕಿಸ್ತಾನಿ ಡ್ರೋನ್‌ಗಳು ಒಂದು ವೇಳೆ ಭಾರತದೊಂದಿಗೆ ಮತ್ತೊಂದು ಸುತ್ತಿನ ಘರ್ಷಣೆ ಸಂಭವಿಸಿದರೆ, ಬಡಿದಾಟಕ್ಕೆ ಯಾವ ಸ್ಥಳ ಸೂಕ್ತ? ಯಾವ ಭಾಗದಲ್ಲಿ ಭಾರತದ ರಕ್ಷಣೆ ದುರ್ಬಲವಾಗಿದೆ? ಮತ್ತು ಯಾವ ಭೂಭಾಗದಿಂದ ಭಯೋತ್ಪಾದಕರನ್ನು ಭಾರತದ ಗಡಿಯೊಳಗೆ ನುಗ್ಗಿಸಬಹುದು? ಎಂಬದನ್ನು ತಿಳಿಯುವ ಪ್ರಯತ್ನ ಮಾಡುತ್ತವೆ. ಆದರೆ ಇಂತಹ ಎಲ್ಲಾ ಪ್ರಯತ್ನಗಳನ್ನು ಭಾರತೀಯ ಸೇನೆ ಹಿಮ್ಮೆಟ್ಟಿಸುತ್ತದೆ.

ಸದ್ಯ ಭಾರತ ತನ್ನ 77ನೇ ಗಣರಾಜ್ಯೋತ್ಸವ ಆಚರಿಸಿಕೊಳ್ಳಲಿದ್ದು, ಈ ಹಿನ್ನೆಲೆಯಲ್ಲಿ ಎಲ್‌ಒಸಿ ಬಳಿ ಪಾಕಿಸ್ತಾನದ ಡ್ರೋನ್‌ ಚಟುವಟಿಕೆಗಳನ್ನು ನಿಗ್ರಹಿಸಲು ಭಾರತೀಯ ಸೇನೆ ಮುಂದಾಗಿದೆ. ಪೂಂಚ್‌, ರಾಜೌರಿ, ಸಾಂಬಾ ಸೇರಿದಂತೆ ಗಡಿ ಭಾಗದ ಸೂಕ್ಷ್ಮ ಪ್ರದೇಶದಲ್ಲಿ ವಿಚಕ್ಷಣೆಯನ್ನು ಹೆಚ್ಚಿಸಲಾಗಿದೆ ಎಂದು ಸೇನಾ ಮೂಲಗಳು ತಿಳಿಸಿವೆ.

    ಈ ರೀತಿಯ ಹೆಚ್ಚಿನ ಸುದ್ದಿಗಳಿಗಾಗಿ kannadiga.online ವೆಬ್ಸೈಟ್ ಗೆ ಭೇಟಿ ನೀಡಿ…

Leave a Comment